ಯಕ್ಷಗಾನದಲ್ಲಿ ನೈತಿಕ ಮೌಲ್ಯ ಪ್ರತಿಪಾದನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 26 , 2013
|
ಒಕ್ಟೋಬರ್ 26 , 2013
|
ಯಕ್ಷಗಾನದಲ್ಲಿ ನೈತಿಕ ಮೌಲ್ಯ ಪ್ರತಿಪಾದನೆ
ಮಂಗಳೂರು :
ಯಕ್ಷಗಾನ ಕಲೆಯ ಸರ್ವಾಂಗೀಣ ವಿಕಾಸಕ್ಕೆ ಸಂಪ್ರದಾಯ ಪಾಲನೆಯ ಜತೆಗೆ ಕಾಲಾನುಸಾರಿ ವಿಚಾರಗಳು ಅಗತ್ಯ. ಕರಾವಳಿಯ ಈ ಕಲೆಯು ಸಂಸ್ಕಾರ, ನೈತಿಕ ಮೌಲ್ಯವನ್ನು ಪ್ರತಿಪಾದಿಸುತ್ತದೆ ಎಂದು ಶ್ರೀ ಕ್ಷೇತ್ರ ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು.
ನಾಟಕ ರಚನೆಗಾರ, ಯುವ ಪ್ರಸಂಗಕರ್ತ ಜಿ.ಕೆ.ಶ್ರೀನಿವಾಸ್ ಸಾಲ್ಯಾನ್ ಅವರಿಗೆ ಮಂಗಳೂರು ಪುರಭವನದಲ್ಲಿ ಕಲಾಭಿಮಾನಿಗಳ ಹಾಗೂ ಕಲಾವಿದರ ಸಂಘಟನೆಯ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಸಾಲ್ಯಾನ್ ಅವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಧಾರ್ಮಿಕ ಮುಖಂಡರಾದ ಪದವಿನಂಗಡಿಯ ಪುರುಷೋತ್ತಮ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಕೆ.ಶ್ರೀನಿವಾಸ್ ಸಾಲ್ಯಾನ್ ಅವರ 2ನೇ ನೂತನ ಪ್ರಸಂಗ 'ಕಾಡಕಾಮಿನಿ' ಅನ್ನು ಶ್ರೀ ಕ್ಷೇತ್ರ ಮಾಣಿಲ ಸ್ವಾಮೀಜಿ ಬಿಡುಗಡೆ ಮಾಡಿದರು.ಮನಪಾ ಸದಸ್ಯ ಹರಿನಾಥ್, ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ, ವಿಶ್ವನಾಥ ಶೆಟ್ಟಿ, ಮರವೂರು ಭಾಸ್ಕರ್ ಸಿ.ಮೂಲ್ಯ, ಗೋಪಾಲ್ ಸುವರ್ಣ ಸುಂಕದಕಟ್ಟೆ, ಪುತ್ತೂರು ಗಂಗಾಧರ ಭಂಡಾರಿ ಮತ್ತು ಪ್ರಮೋದ್ ಭಟ್ ಉಪಸ್ಥಿತರಿದ್ದರು. ಬಳಿಕ ಕನ್ನಡ, ತುಳು ಯಕ್ಷಗಾನ ಪ್ರಸಂಗ ನಡೆಯಿತು.
ಕೃಪೆ : http://udayavani.com/
|
|
|